Рет қаралды 698,232
ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ
#rescue
#dangerous
#dam
Eshwar Malpe social Activities
Contact number : 9663434415
Instagram I'd: eshwar_malpe?ig...
🛑 ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ. 🛑
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯ ಲಕ್ಕವಳ್ಳಿ ಗ್ರಾಮದ ಸಮಾಜ ಸೇವಕ ರೂ ಹಾಗೂ ಮೀನುಗಾರ ರೂ ಆದ ಕೃಷ್ಣ (46) ಎಂಬವರು ಮೀನುಗಾರಿಕೆ ಗೆ ತೆರಳಿದ್ದು, ಆಕಸ್ಮಿಕವಾಗಿ ಭದ್ರಾ ಡ್ಯಾಂ ನಲ್ಲಿ ನೀರಿಗೆ ಬಿದ್ದಿರುತ್ತಾರೆ .
ಮೃತಪಟ್ಟ ಕೃಷ್ಣ ರವರು ಸಮಾಜ ಸೇವೆ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ ಸಹಾಯ ಸಹಕಾರ ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ ಕ್ಲಿಷ್ಟಕರ ಸನ್ನಿವೇಶ ವಿದ್ದರೂ ಸೇವೆ ಯನ್ನು ಮಾಡುವ ಮನೋಭಾವ ಹೊಂದಿದ್ದರು.
ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಸತತ ಎರಡು ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿದರೂ ಕೂಡ ಅವರ ಮೃತ ದೇಹ ವು ಸಿಕ್ಕಿರುವುದಿಲ್ಲ
ಲಕ್ಕವಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ರವರು ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಈ ವಿಚಾರ ವನ್ನು ತಿಳಿಸಿದರು.
ತಕ್ಷಣ ಕಾರ್ಯ ಪ್ರವ್ರತ್ತರಾದ ಆಪದ್ಬಾಂಧವ ಈಶ್ವರ್ ಮಲ್ಪೆ ಮಧ್ಯರಾತ್ರಿ 12:00 ಗಂಟೆಗೆ ಉಡುಪಿಯ ಮಲ್ಪೆಯಿಂದ ತನ್ನ ತಂಡ ದ ಜೊತೆ ಹೊರಟು ಬೆಳಿಗ್ಗೆ 4:00 ಗಂಟೆ ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು.
ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ ಬೆಳಿಗ್ಗೆ 7:00 ಗಂಟೆ ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು.
ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ , ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು.
ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು.
TEAM ESHWAR MALPE
Join this channel to get access to perks:
/ @eshwarmalpe6363