Рет қаралды 2,804
ದಿನಾಂಕ:02-02-2023 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ಬೆಸ್ತರ ಮೀನುಗಾರರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ತಾಲೂಕು,
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯರಾದ ಮಾನ್ಯ ಡಾ.ತಳವಾರ ಸಾಬಣ್ಣಾ ಅವರು, ಶಾಸಕರಾದ ಡಿ.ಸಿ. ತಮ್ಮಣ್ಣ ಅವರು, ಮಾಜಿ ಸಚಿವರಾದ ಶ್ರೀ ಪ್ರಮೋದ ಮದ್ವರಾಜ್ ಅವರು, ಶ್ರೀ ಯಶಪಾಲ್ ಸುವರ್ಣ ಅವರು ಭಾಗವಹಿಸಿದ್ದರು. ಪ್ರಮೋದ ಮದ್ವರಾಜ್ ಅವರು ಮಾತನಾಡುತ್ತಾ ಒಳನಾಡು ಮೀನುಗಾರಿಕೆ ನೀತಿಯನ್ನು ಜಾರಿಗೊಳಿಸಲು ಪ್ರಯತ್ನಮಾಡಿದ್ದೇನೆ.ಜಲಾಶಯಗಳಲ್ಲಿ ಮೀನುಗಾರರಿಗೆ ನೇರವಾಗಿ ಮೀನು ಹಿಡಿಯಲು ಅವಕಾಶ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.