Рет қаралды 7,028
ಪರಮ ಪಾವನ ಶ್ರೀ ಕ್ಷೇತ್ರ ಕಕ್ಯಬೀಡಿಗೆ ಸಮರ್ಪಣೆʼ
“ ಕಕ್ಯಬೂಡುದ ಬೊಲ್ಪು..”
ಕಕ್ಯಬೀಡು ಕ್ಷೇತ್ರದ ಆರಾಧನಾ ಶಕ್ತಿಗಳನ್ನು ನೆನೆಯುತ್ತಾ ಸ್ತುತಿಸಿಕೊಳ್ಳುವ ತುಳು ಭಕ್ತಿ ಗೀತೆ
ಸಾಹಿತ್ಯ ಮತ್ತು ನಿರ್ದೇಶನ: ಶ್ರೀ ಪಾರ್ಶ್ವನಾಥ ಜೈನ್ ಹೇರೆತ್ಯಾರು ,ಕಕ್ಯಪದವು
ಗಾಯನ ಮತ್ತು ಸಂಗೀತ: ಶ್ರೀ ವಿಜಯ್ ಕುಮಾರ್ ಶೆಟ್ಟಿ, ಮೂಡುಬೆಳ್ಳೆ
ಸಂಕಲನ ಮತ್ತು ವಿಶೇಷ ಸಹಕಾರ: ಶ್ರೀ ದುರ್ಗಾಪ್ರಸಾದ್, ಕಕ್ಯಪದವು
ಛಾಯಗ್ರಹಣ: ಶ್ರೀ ತೀರ್ಥೇಶ್, ತೀರ್ಥೇಶ್ ಡಿಜಿಟಲ್ ಸ್ಟುಡಿಯೋ ಮತ್ತು ವಿಡಿಯೋ ಕಕ್ಯಪದವು
ಡ್ರೋನ್ ವಿಡಿಯೋ ಕೃಪೆ: ಶ್ರೀ ಪುನೀತ್, ಅನು ಸ್ಟುಡಿಯೋ ಮತ್ತು ವಿಡಿಯೋ ಮಾವಿನಕಟ್ಟೆ
ಸಹಕಾರ: ಶ್ರೀ ಗುರುಪ್ರಸಾದ್ ರೈ ಅಟೆದಡ್ಕ,
ಶ್ರೀ ಗುರುಪ್ರಕಾಶ್ ಕೊರಡಿಂಗೇರಿ,
ಶ್ರೀ ಸೋಮಶೆಖರ್ ಕಕ್ಯ,
ಶ್ರೀ ಜಗದೀಶ್ ಸುವರ್ಣ ಕಕ್ಯ
ನಿರ್ಮಾಪಕರು: ಶ್ರೀ ಧರ್ಮೇಶ್ ಶೆಟ್ಟಿ ಕಕ್ಯಪದವು,
ಶ್ರೀ ಚೇತನ್ ಹೂರ್ದೊಟ್ಟು,
ಶ್ರೀ ವೃಷಭರಾಜ ಕೊಟ್ಟಾರಿ ಹೇರೆತ್ಯಾರು ,
ಶ್ರೀ ರವಿ ಶೆಟ್ಟಿ ಬೊಳ್ಯ,
ಶ್ರೀ ಪ್ರಕಾಶ್ ಅಚಾರ್ ಕೆರೆ ಮನೆ ಕಕ್ಯಪದವು,
ಶ್ರೀ ಪ್ರವೀಣ್ ಶೆಟ್ಟಿ ಬೊಳ್ಯ,
ಶ್ರೀ ಸುರೇಶ್ ರೈ ಗುರುಜ್ಯೋತಿ ಕಮ್ಯೂನಿಕೇಶನ್ಸ್ ಕಕ್ಯಪದವು,
ಶ್ರೀ ಪ್ರಶಾಂತ್ “ಅನುಗ್ರಹ” ಕಕ್ಯಪದವು
ಪ್ರಚಾರ ಕಲೆ : ಶ್ರೀ ಪವಿತ್ ಕಕ್ಯಪದವು
ಶುಭ ಹಾರೈಸಿದವರು :
ಶ್ರೀ ರಾಜೇಂದ್ರ ಅರ್ಮುಡ್ತಾಯ , ಅರ್ಚಕರು ಮತ್ತು ಅಸ್ರಣ್ಣರು
ಶ್ರೀ ರಾಜವೀರ್ ಜೈನ್ ಬಾರ್ದಡ್ಡ್ ಗುತ್ತು, ಮೊಕ್ತೇಸರರ ವಂಶಜರು
ಶ್ರೀ ಜಾರಪ್ಪ ಶೆಟ್ಟಿ ಕಂಡಿಗ, ಸ್ಥಾಪಕಾಧ್ಯಕ್ಷರು ಜೀರ್ಣೋದ್ಧಾರ ಸಮಿತಿ
ಶ್ರೀ ದಾಮೋದರ ನಾಯಕ್ ಉಳಿ, ನಿಕಟಪೂರ್ವ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ
ಡಾ|| ಸತ್ಯಶಂಕರ್ ಶೆಟ್ಟಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
ಶ್ರೀ ವೀರೇಂದ್ರ ಕುಮಾರ್ ಜೈನ್, ಮೇನಜರ್ ಶ್ರೀಕ್ಷೇತ್ರ ಕಕ್ಯಬೀಡು
Please activate CC option for video view. Details of Subtitles Used in Video are As follows
“ ಶ್ರೀ ಮಹಾಗಣಪತಿ ದೇವರು “ ಶ್ರೀ ಕ್ಷೇತ್ರ ಕಕ್ಯಬೀಡು
ಕ್ಷೇತ್ರದ ಆರಾಧ್ಯ ದೇವತೆ “ ಶ್ರೀ ಪಂಚದುರ್ಗಾಪರಮೇಶ್ವರೀ ಅಮ್ಮನವರು “
ಕಕ್ಯಬೀಡಿನ ಕಾರಣಿಕ ಮಹಾಶಕ್ತಿ “ ಶ್ರೀ ಐವೇರ್ ಉಳ್ಳಾಕುಲು"
“ ಗುಂಡ್ಡೊದಾರ್ “ ಎಂದೇ ಹಿರಿಯರು ಸ್ತುತಿಸಲ್ಪಡುತ್ತಿದ್ದ ಕಕ್ಯಬೀಡು ಕ್ಷೇತ್ರದ “ಶ್ರೀ ಐವೇರ್ ಉಳ್ಳಾಕುಲು"
ಈ ʼಕಕ್ಯದ ಬೀಡುʼ ಹಿಂದಿನ ಕಾಲದಲ್ಲಿ ಬಂಗರಸರ ಅಡಳಿತಕ್ಕೆ ಒಳಪಟ್ಟ ಬಂಗ ರಾಜ್ಯದಲ್ಲಿತ್ತು ಎಂಬುದು ಐತಿಹ್ಯ. ಬೀಡಿನ ಅಧಿಕಾರ ಗದ್ದುಗೆಯು ʼಹೆಗ್ಗಡೆʼ ಪಟ್ಟವಾಗಿತ್ತು. ಇಲ್ಲಿ ಕಾಣ ಸಿಗುವ ಪರಿಸರದ ದೃಶ್ಯವೇ ಬೀಡಿನ ಪ್ರಾಚೀನತೆಗೆ ಒಂದು ದೊಡ್ಡ ಸಾಕ್ಷಿಯಾಗಿದೆ.
ಬಹು ವರ್ಷಗಳ ಹಿಂದೆ ಮೈಂದ ಹೆಗ್ಗಡೆ ಎಂಬ ಹೆಸರಿನರು (ಅರಸನೆಂದೇ ಉರಿನ ಹಿರಿಯರು ಹೇಳುತ್ತಿದ್ದುದ್ದು) ಬೀಡಿನ ಯಜಮಾನತ್ವವನ್ನು ಹೊಂದಿದ್ದರು ಎಂಬುದು ಪ್ರತೀತಿ.
ಯಜಮಾನನಾದ ಮೈಂದ ಹೆಗ್ಗಡೆಗೆ ಉಳ್ಳಾಕುಲು ಸ್ವಪ್ನವಾದ ಸ್ಥಳವೇ ಈ “ ಕಕ್ಯದ ಬೀಡು”.
ಕ್ಷೇತ್ರವನ್ನು ಪೊರೆಯುವ ʼ ಶ್ರೀ ಐವೇರ್ ಉಳ್ಳಾಕುಲು ʼ ಶಕ್ತಿಯ ಮೂಲ ನೆಲೆಯೂ ಹೌದು.
ಮೈಂದ ಹೆಗ್ಗಡೆಯ ಕಾಲದಲ್ಲಿ ಮಕ್ಕಳ ಪರಿ ಪಾಲನೆಗಾಗಿ ಹಾಲು ಬೇಕು ಎಂದು ಕೇಳಿಕೊಂಡು ಬಂದ ತಾಯಿ ಮತ್ತು ಮೂರು ಹೆಣ್ಣು ಮಕ್ಕಳನ್ನು ಬೀಡಿನವರು ವಿಚಾರಿಸಿದಾಗ ತಾವು ʼಉದಿಗುಡ್ಡೆʼಯವರೆಂದು ಹೇಳಿಕೊಳ್ಳುತ್ತಾರೆ. ನಂತರ ಅವರು ಬೀಡಿನ ಹೆಗ್ಗಡೆಯ ಸ್ವಪ್ನದಲ್ಲಿ ಸತ್ಯವನ್ನು ಅರುಹುತ್ತಾರೆ.
ಏರು ಶಿಖರವಾದ ʼಉದಿಗುಡ್ಡೆʼ ಯ ಸುಂದರ ದೃಶವನ್ನು ದೇವಸ್ಥಾನದ ಹಿಂಭಾಗದಿಂದ ನಾವು ಕಣ್ಣ್ ತುಂಬಿಕೊಳ್ಳಬಹುದು.
ಪಾಡ್ದನದಲ್ಲಿ ಕೇಳಿಬರುವಂತೆ ಕಕ್ಯದಬೀಡನ್ನು “ಕಕ್ಯ ಮುರಿಯೊದ ಬೂಡು” ಎಂದೂ ಹೇಳಲಾಗುತ್ತದೆ.
ʼಕಡಬʼದಿಂದ ಕಕ್ಯದ ಬೀಡಿಗೆ ತಂದ ಜೊತೆ ಕೋಣಗಳೊಡನೆ ಬಂದ ದೈವವೇ ʼಶ್ರೀ ಕಡಂಬಿಲ್ತಾಯʼ.ಕ್ಷೇತ್ರದಲ್ಲಿ
ರಾಜನ್ ದೈವ ಶ್ರೀ ಕೊಡಮಣಿತ್ತಾಯ (ಪೆರಿಂಜ ಮಾರೂರ ದೈವ)ನ ಆರಾಧನೆಯೂ ಕಂಡುಬರುತ್ತದೆ.
ಶ್ರೀ ಗಣಪತಿ ರಾವ್ ಐಗಳ್ ರವರ "ದಕ್ಷಿಣ ಕನ್ನಡದ ಪ್ರಾಚಿನ ಇತಿಹಾಸ" ಪುಸ್ತಕದಲ್ಲಿ ಉಲ್ಲೇಖಿಸಿದಂತೆ ಕ್ರಿ.ಶ 1157 ರಿಂದ ಕ್ರಿ.ಶ 1858 ರವರೆಗೆ ಆಳುತ್ತಿದ್ದ ಬಂಗರಸರ ರಾಜ್ಯಾಡಳಿತದಲ್ಲಿ ʼನಾಲೂರು ಮಾಗಣೆ ರಾಜ ಗುತ್ತುʼ ಅಸ್ತಿತ್ವದಲ್ಲಿತ್ತು ಎಂಬುದು ತಿಳಿದು ಬರುತ್ತದೆ.ಈ ಮಾಗಣೆ ರಾಜ ಗುತ್ತಿನ ವ್ಯಾಪ್ತಿಗೆ ಒಳಪಟ್ಟ ಹಲವು ಗ್ರಾಮಗಳಲ್ಲಿ, ಕಕ್ಯ ಮತ್ತು ಬೊಳ್ಯ ಗ್ರಾಮ (ದೈವದ ನುಡಿ ಕಟ್ಟಿನಲ್ಲಿಯೂ ಕೇಳಿ ಬರುವಂತೆ) ಎಂಬುದಾಗಿ ಈ ಭಾಗವು ಎರಡು ಗ್ರಾಮ ವಿಭಜನೆಯನ್ನು ಹೊಂದಿತ್ತು. ಇದರಲ್ಲಿ ಕಕ್ಯ ಗ್ರಾಮದ ಎಕೈಕ ಗುತ್ತೇ ಈ “ಬಾರ್ದಡ್ಡು ಗುತ್ತು”. ಇದು ಶ್ರೀ ಕ್ಷೇತ್ರ ಕಕ್ಯಬೀಡಿನ ಮೊಕ್ತೇಸರಿಕೆಯ ಮನೆತನದ ಮನೆಯೂ ಹೌದು.
( ಪ್ರಸ್ತುತವಾಗಿ ಶ್ರೀ ಕ್ಷೇತ್ರದ ಅಡಳಿತವನ್ನು ಜೀರ್ಣೋದ್ಧಾರ ಸಮಿತಿಯು ಉರ-ಪರವೂರ ಭಕ್ತರ ಸೇರುವಿಕೆಯಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದೆ )
ಶ್ರೀ ಕ್ಷೇತ್ರದಲ್ಲಿರುವ ʼಶ್ರೀ ದೈವೊಂಕುಳೆ ಮಾಡʼ
ಕಕ್ಯದಲ್ಲಿರುವ ದೈವೊಂಕುಳೆ ಗುಡಿ
ಶ್ರೀ ಕ್ಷೇತ್ರದಲ್ಲಿರುವ ʼಮಲ್ಯೋಡಿʼ ಎಂಬ ಸ್ಥಳ ನಾಮದ ʼಶ್ರೀ ಮಲ್ಯೋಡಿತ್ತಾಯ ದೈವʼ
ಶ್ರೀ ಕ್ಷೇತ್ರದಲ್ಲಿರುವ ಶ್ರೀ ಕಲ್ಕುಡ ದೈವ
ಕಕ್ಯದಲ್ಲಿ ನವೀಕರಣಗೊಂಡ ʼಶ್ರೀ ಮಲ್ಯೋಡಿತ್ತಾಯ ದೈವʼ ಮತ್ತು ʼಶ್ರೀ ಕಲ್ಕುಡ ದೈವʼ ಗಳ ಗುಡಿ
ನವೀಕರಣಗೊಂಡ ಕಕ್ಯದಲ್ಲಿರುವ ʼಕಕ್ಯ ಬೊಂಟ್ರರ ಚಾವಡಿʼ
Music courtesy
• AMMA ERENA JOKULENKUL(...
#bhakthisongs #devotionalsong #ShriKshethraKakyabeedu #Vijayshettymoodubelle