Рет қаралды 67,433
ಮಂಗಳೂರಿನ ನೀರುಮಾರ್ಗದಲ್ಲಿರುವ ಜಿ.ಆರ್.ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಹೆಸರಿನಲ್ಲಿ ಭಾರೀ ದೋಖಾ ನಡೆದಿದೆ. ಇದೀಗ ಕಾಲೇಜು ಆಡಳಿತ ಮಂಡಳಿಯ ಅಕ್ರಮದಿಂದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಬೇಸತ್ತ ಮೆಡಿಕಲ್ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಗಣೇಶ್ ರಾವ್ ಮಾಲೀಕತ್ವದ ಜಿ.ಆರ್.ಮೆಡಿಕಲ್ ಕಾಲೇಜಿನಲ್ಲಿ ಎರಡು ವರ್ಷಗಳ ಹಿಂದೆ ವೈದ್ಯಕೀಯ ಕೋರ್ಸ್ ಆರಂಭಗೊಂಡಿತ್ತು. 2022-23ನೇ ಸಾಲಿಗೆ 150 ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಎಂಬಿಬಿಎಸ್ ದಾಖಲಾತಿ ನೀಡಿತ್ತು. ಆದರೆ ಸರ್ಕಾರದ ಅನುಮತಿಯಿಲ್ಲದೆ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ನೀಡಲಾಗಿತ್ತು. ಆದ್ದರಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಲಾಗದೆ ಅತಂತ್ರರಾಗಿದ್ದಾರೆ. ಅದಲ್ಲದೆ ಲಕ್ಷಾಂತರ ಫೀಸ್ ತೆತ್ತು 2022-23ನೇ ಸಾಲಿಗೆ ಪ್ರವೇಶ ಪಡೆದಿರುವ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಬಗ್ಗೆ ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಸಮಗ್ರ ತನಿಖೆಗೆ ಸೂಚನೆ ನೀಡಿದೆ.
ಇದೀಗ ಲಕ್ಷ ಲಕ್ಷ ಫೀಸ್ ಅನ್ನು ಸಂಗ್ರಹಿಸಿ ವಂಚಿಸಿದ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೀರುಮಾರ್ಗದ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಧರಣಿ ನಡೆಯುತ್ತಿದೆ.
Education illegality in the name of mbbs medical seat in mangalore massive protest by students
#mangalore #medical #protest
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/