Рет қаралды 829
ಜಯತೀರ್ಥ ವಿದ್ಯಾಪೀಠಕ್ಕೆ ನೂತನವಾಗಿ ಸೇರಿಕೊಂಡ ಅನೇಕ ವಿದ್ಯಾರ್ಥಿಗಳು ಸ್ವಾಮಿಗಳ ಹತ್ತಿರ समित्पाणिः श्रोत्रियं ब्रह्मनिष्ठं ಅಂತ ಹೇಳಿದಂತೆ ವಿದ್ಯಾರ್ಥಿಗಳು ತಾವು ಗುರುಗಳ ಹತ್ತಿರ ಅಧ್ಯಯನ ಮಾಡುವುದಕ್ಕೆ ಹೋಗಬೇಕಾದಾಗ ಸಮಿತ್, ಕಾಯಿ (ಫಲ) ಕೈಯಲ್ಲಿ ಹಿಡಿದು ಅವರ ಮುಂದೆ ಇಟ್ಟು ಕೈ ಮುಗಿದು ನಾವು ನಿಮ್ಮ ಶಿಷ್ಯರು ಆಗುವುದಕ್ಕೆ ಬಂದಿದ್ದೇವೆ ತಾವು ನಮ್ಮನ್ನು ನಿಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಅನುಗ್ರಹ ಮಾಡಿ ತಾವು ಹೇಳಿದ ಎಲ್ಲ ಆಜ್ಞೆ ಹಾಗೂ ಗುರುಕುಲದ ಪದ್ಧತಿಯನ್ನು ಪಾಲನೆ ಮಾಡುತ್ತೇವೆ ಎಂದು ಪ್ರಾರ್ಥಿಸಬೇಕು.ಭಕ್ತಿಯಿಂದ ಎಲ್ಲಾ ವಟುಗಳು ಪ್ರಾರ್ಥಿಸಿದ್ದಾರೆ.ಗುರುಗಳು ಈ ಪ್ರಾರ್ಥನೆಯನ್ನು ಸಂತೋಷದಿಂದ ಮನ್ನಿಸಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಗುರುಕುಲದ ನಿಯಮಗಳನ್ನು ಆದೇಶ ಮಾಡಿ ಅನುಗ್ರಹ ಮಾಡಿದ್ದಾರೆ.16-07-2024
ಆಷಾಢ ಶುದ್ಧ ದಶಮಿ,ಜಯತೀರ್ಥ ವಿದ್ಯಾಪೀಠ ಶ್ರೀ ಉತ್ತರಾದಿ ಮಠ,ಬೆಂಗಳೂರು
#satyatmara_dasanudasa #uttaradimatha