Рет қаралды 1,318
ಇಲ್ಲೊಂದು ವಿಚಿತ್ರ ಆಚರಣೆಯಿದೆ.. ಇಲ್ಲಿ ಮುಳ್ಳುಗಳ ಮೇಲೆ ಯುವಕರು ಜಿಗಿಯುತ್ತಾರೆ.. ಮುಳ್ಳಿನ ಮೇಲೆ ಕುಣಿದಾಡ್ತಾರೆ. ಮುಳ್ಳನ್ನೇ ಹಾಸಿಗೆ ಮಾಡಿಕೊಂಡು ಮಲಗ್ತಾರೆ.. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವೇ ಆಗಲ್ಲ. ಇದೆಲ್ಲವೂ ಆಂಜನೇಯ್ಯನ ಮಹಿಮೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಅಷ್ಟಕ್ಕೂ ಇಂತಹ ವಿಚಿತ್ರ ಆಚರಣೆ ಕಂಡುಬರೋದು ಕೊಪ್ಪಳ ಜಿಲ್ಲೆಯಲ್ಲಿ..
ಹೌದು, ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಆಂಜನೇಯ್ಯನಿಗೆ ಮುಳ್ಳು ಹರಕೆ ಸಲ್ಲಿಸುವ ಆಚರಣೆ ಆರಂಭವಾಗುತ್ತದೆ. ಕೊಪ್ಪಳ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ಮುಳ್ಳು ಹರಕೆಯು ಯುಗಾದಿವರೆಗೂ ನಡೆಯುತ್ತದೆ. ಅದರಂತೆ, ಕೊಪ್ಪಳ ತಾಲೂಕಿನ ಲೇಬಗೆರಿಯಲ್ಲಿ ಮಾರುತೇಶ್ವರನಿಗೆ ಶನಿವಾರ ಮುಳ್ಳು ಹರಕೆ ಕಾರ್ಯಕ್ರಮ ನಡೆಯಿತು.
ಲೇಬಗೆರಿಯ ಮದ್ದಾನ ಸಂಸ್ಥಾನ ಮಠದ ಆಡಳಿತವಿರುವ ಮಾರುತೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಮುಳ್ಳು ಹರಕೆ ಕಾರ್ಯಕ್ರಮ ನಡೆಯಿತು. ಮುಂಜಾನೆ ಹತ್ತು ಗಂಟೆಯ ವೇಳೆಗೆ ಯುವಕರ ತಂಡವು ಗುಡ್ಡಕ್ಕೆ ಹೋಗಿ ಮುಳ್ಳು ಕಂಟಿಯನ್ನು ತರುತ್ತಾರೆ. ಮುಳ್ಳನ್ನು ಕೊಡಲಿಯಿಂದ ಕಡಿಯದೇ ಕಲ್ಲುಗಳಿಂದ ಕಡಿದು ತರ್ತಾರೆ. ಗುಡ್ಡದಿಂದ ಗ್ರಾಮಕ್ಕೆ ಮುಳ್ಳನ್ನು ತರುವ ಯುವಕರು ಗ್ರಾಮದ ಬೀದಿಯಲ್ಲಿ ಒಟ್ಟಾಕಿ ಅದರ ಮೇಲೆ ಜೀಗಿದಾಡುತ್ತಾರೆ.
#Koppal #ThornFestival #KoppalNews
Our Website : Vijaykarnataka.com
Facebook: / vijaykarnataka
Twitter: / vijaykarnataka