Рет қаралды 632
ಕೇಂದ್ರ ಬಜೆಟ್ 2024 - 25ಕ್ಕೆ ದಿನಗಣನೆ ಶುರುವಾಗಿದ್ದು, ನಿರ್ಮಲಾ ಸೀತಾರಾಮನ್ ಅವರು ತಮ್ಮ ಏಳನೇ ಬಜೆಟ್ ಅನ್ನು ಜುಲೈ 23ಕ್ಕೆ ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮೇಲೆ ಉದ್ಯಮಿಗಳು, ಸಾರ್ವಜನಿಕರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಅದರಲ್ಲೂ ರೈಲ್ವೇ ಕ್ಷೇತ್ರದಲ್ಲಿ ಅನೇಕ ನಿರೀಕ್ಷೆಗಳು ಇದ್ದು, ಈ ಬಗ್ಗೆ ಬೆಂಗಳೂರು ಮೆಟ್ರೋ ಹಾಗೂ ಉಪನಗರ ರೈಲ್ವೇ ಪ್ರಯಾಣಿಕರ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಮಂಡೋತ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಳೇ ಯೋಜನೆ ಮುನಿರಾಬಾದ್ - ಮೆಹಬೂಬ್ನಗರ ರೈಲ್ವೇ ಕಾಮಗಾರಿಗೆ ವೇಗ ನೀಡಬೇಕು. ಹಳಿಗಳ ವಿದ್ಯುತ್ತೀಕರಣ ಶೇ.87ರಷ್ಟು ಆಗಿದ್ದು, ಕರಾವಳಿ ಭಾಗದಲ್ಲಿ ಹಳಿಗಳ ವಿದ್ಯುತ್ತೀಕರಣ ಆಗಬೇಕು. ಕರಾವಳಿಗೆ ಹೆಚ್ಚಿನ ರೈಲ್ವೇ ಯೋಜನೆಗಳು ಬೇಕಿದೆ. ಅದು ಕರ್ನಾಟಕದ ಪ್ರಮುಖ ಅವಿಭಾಜ್ಯ ಅಂಗ, ಆದ್ದರಿಂದ ಅಲ್ಲಿ ಹೆಚ್ಚಿನ ರೈಲುಗಳ ಅಗತ್ಯವಿದೆ. ಕೊಂಕಣ ರೈಲ್ವೇ ವಿಭಾಗವನ್ನು ನೈರುತ್ಯ ರೈಲ್ವೇಗೆ ಸೇರಿಸಿ, ಮಂಗಳೂರು ರೈಲ್ವೇ ವಲಯವನ್ನು ಘೋಷಿಸಬೇಕಿದೆ. ಇದರಿಂದ ಕರಾವಳಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.
Union Budget 2024 Prakash Mandoth Shares Karnataka Railway Sector Expectations
#unionbudget2024 #nirmalasitharaman #modi
Our Website : kannada.econom...
Facebook: / etkannada
Twitter: / etkannada
A destination to know all that is happening in the economic world in your favorite language Kannada. Business, Finance, India and World Economy news in Kannada.