Рет қаралды 20,826
ಹಾಸ್ಯೋತ್ಸವ: ಶ್ರೀ ಬಿ. ಪ್ರಾಣೇಶ, ನಗೆ ಭಾಷಣಕಾರರು, ಗಂಗಾವತಿ
ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ
ಹಾಸ್ಯದ ಹೊನಲನ್ನು ಹರಿಸುವ ಮೂಲಕ ಜನರನ್ನು ನಗೆಗಡಲಿನಲ್ಲಿ ತೇಲಿಸುವ ಬಿ. ಪ್ರಾಣೇಶ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ 3000 ಕಾರ್ಯಕ್ರಮಗಳನ್ನು ಮೀರಿ ವಿಶ್ವ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದ್ದಾರೆ. ಗಂಗಾವತಿಯಿಂದ ಪ್ರಾರಂಭಿಸಿದ ನಗೆಯ ಹೊನಲು ನಾಡಿನಾದ್ಯಂತ ಪಸರಿಸುತ್ತಾ ನಾಡಿನ ಗಡಿಯನ್ನು ದಾಟಿ ವಿದೇಶದಲ್ಲೂ ಕೂಡಾ ನಗೆಯ ಹೊನಲು ಹರಿದಿದ್ದು, ನಿಜಕ್ಕೂ ಕೂಡಾ ಹೆಮ್ಮೆಯ ಸಂಗತಿ. ನಾಡಿನ ಎಲ್ಲ ಚಾನಲ್ಗಳಲ್ಲಿ ಮತ್ತು ರಾಜ್ಯದ ಎಲ್ಲ ವಿಧದ ಕಾರ್ಯಕ್ರಮಗಳಲ್ಲಿ ತಮ್ಮ ನಗೆ ಭಾಷಣ ಮೂಲಕ ಜನರನ್ನು ನಗಿಸುತ್ತಾ ಸಾಗುತ್ತಿರುವುದು ಸಂತಸದ ವಿಷಯವಾಗಿದೆ. ಪ್ರಾಣೇಶ ಎಂದರೆ ಜನಜಂಗುಳಿಯೇ ನಿರ್ಮಾಣವಾಗುತ್ತಿರುವುದು ಅವರ ಜನಪ್ರಿಯತೆಯ ಸಾಕ್ಷಿಯಾಗಿದೆ.