Рет қаралды 83,155
ಮನೆಗೆಲಸಕ್ಕಾಗಿ ದುಬೈಗೆ ತೆರಳಿ ಕುಟುಂಬಸ್ಥರ ಸಂಪರ್ಕಕ್ಕೇ ಸಿಗದೇ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಶಿಕಲಾ ಎಂಬಾಕೆಯನ್ನು ದುಬೈನಲ್ಲಿರುವ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಘಟನೆ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ. ಶಶಿಕಲಾ ಕಣ್ಮರೆಯಾಗಿದ್ದಾಳೆ ಎಂದು ಈಕೆ ತಾಯಿ ನೀಡಿದ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಬಳಿಕ ಈಕೆಯ ಶೋಧಕ್ಕೆ ಮುಂದಾದ ಸಂಘಟನೆ ಸದಸ್ಯರು ಆಕೆಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತಂದಿದ್ದಾರೆ. ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ಮಾಧ್ಯಮಗಳೊಂದಿಗೆ ಮಾತನಾಡಿ, 'ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಶಶಿಕಲಾ ಸುದ್ದಿ ಕೇಳಿ ಎನ್ಆರ್ಐ ಸದಸ್ಯ ಹರೀಶ್ ಕೋಡಿ ನಮ್ಮನ್ನು ಸಂಪರ್ಕಿಸಿದ ಕೂಡಲೇ ನಾವು ಶಶಿಕಲಾರವರ ಪ್ರಸಕ್ತ ವಾಸಸ್ಥಳದ ಮಾಹಿತಿ ಕಲೆಹಾಕಿ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಛಾಯ ಕೃಷ್ಣಮೂರ್ತಿಯವರಿಗೆ ಮಾಹಿತಿ ನೀಡಿದೆವು.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.co...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma