Рет қаралды 553
ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ವರ ವಚನ ನಿರ್ವಚನ.
ಆದಿ ಬಿಂದುವಿನೊಳಗೆ ಅಭೇದ್ಯ
ವಾದ ನಿರವಯಲ ನಿರಂಜನನೆ |
ಚಿತ್ತದೊಳಗೆ ಧಾತುರೂಪ ನಿ
ವೃತ್ತಿಮಾಡಿ ನಿಜದೆಚ್ಚರಲ್ಲಿ
ಪ್ರತ್ಯಕ್ಷವಾದ ನಿಜರೂಪ ನಿರ್ವಯಲ
ಮೂರ್ತಿ ಬಸವತಂದೆ ||
..
ಮನದ ನೆನಹಿನಲ್ಲಿ ಮನರೂಪಾಗಿ
ಚಿನುಮಯ ಚಿದ್ರೂಪವನೆಯ್ದೆ ಮಹಾ
ಘನರೂಪನಡಗಿಸಿ ನಿಷ್ಕಲ ನಿರವಯ
ವನು ತಾಳಿದ ಬಸವತಂದೆ ||
ಷಡುಶಕ್ತಿಗಳು ಶಕ್ತಿತ್ರಯವ ಮಾಡಿ
ಪಿಡಿದಾ ಶಕ್ತಿತ್ರಯವನೇಕವ ಮಾಡಿ
ದಿಟ ಪರಶಕ್ತಿ ಬಿಂದುವಿನಲ್ಲಿ ತೇಜೋ
ಕೃತಿಯಾದ ನಿರ್ವಯಲ ಬಸವತಂದೆ ||
ನಾದ - ಬಿಂದು ಸ್ವರೂಪ-ನಿರೂಪ
ಆದಿ ಬಿಂದುವೆ ಸುನಾದ
ನಾದ -ಬಿಂದು ಕಳಾತೀತ ನಿರ್ವಯಲ ನಿಜ
ವಾದ ನಿರಂಜನ ಅನಾದಿ ಬಸವತಂದೆ ||
ಸಕಲ-ನಿಷ್ಕಲ ತತ್ವದ ಸಂಜೀವದ
ಯುಕುತಿಯ ಮೂಲ ಪ್ರಭಾವದ
ಶಕುತಿಯೊಳಗೆ ನಿರ್ವಯಲಾದ
ಕೂಡಲಚನ್ನಸಂಗನಲ್ಲಿ ಬಸವಣ್ಣ ||
ಬಸವಣ್ಣನವರ ಲಿಂಗಾಂಗ ಸಾಮರಸ್ಯದ ಭವ್ಯ ನಿಲುವನ್ನು ಕಂಡ ಚನ್ನಬಸವಣ್ಣನವರು ಈ ದಿವ್ಯ ಸ್ವರವಚನವನ್ನು ರಚಿಸಿದ್ದಾರೆ.