Рет қаралды 32,225
ʻಮೆಚ್ಚುಗೆʼ ಹಾಗೂ ʻಅಭಿಪ್ರಾಯʼ ಸೂಚಿಸಲು ಮತ್ತು ಸಬ್ ಸ್ಕ್ರೈಬ್ ಮಾಡಲು ವಿನಂತಿ.
Japan - Divine Bond with Hindu Devatas. Video link
• Japan - Divine Bond w...
ಕನ್ನಡ ಭಾಷೆಯ ಹಿರಿಮೆಗಾಗಿ ನಡೆದ ಗೋಕಾಕ್ ಚಳುವಳಿ
ಡಾ. ರಾಜ್ ಕುಮಾರ್ ವಹಿಸಿದ ನೇತೃತ್ವ - ಕನ್ನಡ ಜಾಗೃತಿ - ಸಾಕ್ಷ್ಯಚಿತ್ರ
---------------------------------------------------------
ಪ್ರತಿವರ್ಷ ನವೆಂಬರ್ ೧ ರಂದು ಕರ್ನಾಟಕ ಸರಕಾರ ಅಧಿಕೃತವಾಗಿ ಆಚರಿಸುವ ಕನ್ನಡ ರಾಜ್ಯೋತ್ಸವದಲ್ಲಿ ಅನೇಕ ಸಂಘ ಸಂಸ್ಥೆಗಳು - ಜನ ಸಾಮಾನ್ಯರು ಸಂಭ್ರಮದಿಂದ ಪಾಲ್ಗೊಳ್ತಾರೆ. ಹೊರನಾಡುಗಳಲ್ಲಿ ನೆಲೆಸಿರುವ ಕನ್ನಡಿಗರೂ ಹಲವಾರು ದೇಶಗಳಲ್ಲಿ ಆಚರಿಸುವ ಈ ಹೆಮ್ಮೆಯ ಸಂಭ್ರಮಾಚರಣೆಯ ಹಿಂದಿರುವ ದೀರ್ಘ ಇತಿಹಾಸದತ್ತ ಒಂದು ನೋಟ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡುತ್ತಿದ್ದ ಕನ್ನಡಿಗರು ಉದಯವಾಯಿತು ಕನ್ನಡ ನಾಡು ಎಂದು ಸಂಭ್ರಮಪಟ್ಟರು. ನಾಡಗೀತೆ ಎಂದು ಪ್ರಸಿದ್ಧವಾಗಿದ್ದ ಈ ಗೀತೆಯನ್ನು ರಚಿಸಿದವರು, ಕವಿ, ನಾಟಕಕಾರ, ಸ್ವಾಂತಂತ್ರ್ಯ ಹೋರಾಟಗಾರ ಹುಯಿಲಗೋಳ ನಾರಾಯಣರಾಯರು.
ಈ ಸಂಭ್ರಮದೊಂದಿಗೆ, ಬಹುಕಾಲದಿಂದ ನೆಲ - ಜಲ - ಭಾಷಾ ಸಮಸ್ಯೆಗಳು ಇರುವಂತೆಯೇ ಅದಕ್ಕಾಗಿ ಹೋರಾಟ ಮಾಡಿರುವುದೂ ಕಾಣುತ್ತದೆ. ಹಲವೊಮ್ಮೆ ಕಾವೇರುವ ಕಾವೇರಿ ನೀರಿನ ಸಮಸ್ಯೆ, ಆಗಿಂದಾಗ್ಗೆ ಮುನ್ನಲೆಗೆ ಬರುವ ಬೆಳಗಾಂ ತಮ್ಮದೆನ್ನುವ ಪಕ್ಕದ ರಾಜ್ಯದ ತಗಾದೆಗಳೊಂದಿಗೆ ಕನ್ನಡ ಭಾಷೆಯ ಹಿರಿಮೆಗೆ ಕುತ್ತು ಬಂದಾಗ ಚಳುವಳಿಗಳು ನಡೆದಿವೆ. ಅದರಲ್ಲಿಯೂ ೧೯೮೨ ರಲ್ಲಿ ನಡೆದ ಜನಾಂದೋಲನ ವಿಶಿಷ್ಟವಾದದ್ದು.
ಅದರಲ್ಲಿಯೂ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ನಾಯಕತ್ವ ವಹಿಸಿಕೊಂಡ ಮೇಲೆ ಕನ್ನಡ ಭಾಷೆಯ ಹಿರಿಮೆಗಾಗಿ ನಡೆದ ಅತ್ಯಂತ ದೊಡ್ಡ ಆಂದೋಲನ, ಇಡೀ ರಾಜ್ಯವನ್ನು ವ್ಯಾಪಿಸಿತು.
ಆದರೆ, ಇದನ್ನು ದೃಶ್ಯ ಮಾಧ್ಯಮದಲ್ಲಿ ದಾಖಲಿಸುವುದು ಆ ಸಮಯದಲ್ಲಿ ನಡೆಯುತ್ತಿರಲಿಲ್ಲ. ಆಗ, ನಾನು ಹಾಗೂ ನನ್ನ ಪತಿ ಬಿ.ಎಸ್. ಮನೋಹರ್ ನಮ್ಮ ಬಳಿ ಇದ್ದ ಸೂಪರ್ ೮ ಎಂ.ಎಂ. ಕ್ಯಾಮರಾದಲ್ಲಿ ಸ್ವಂತ ಖರ್ಚಿನಲ್ಲಿ, ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಿದ್ದು, ನಂತರ ಅದನ್ನು ವಿಡಿಯೋ ಆಗಿ ಪರಿವರ್ತಿಸಿದ್ದೇವೆ.
ವೀಡಿಯೋ ವೀಕ್ಷಿಸಿದ ಸಹೃದಯರೆಲ್ಲರಿಗೂ ಧನ್ಯವಾದಗಳು
ʻಮೆಚ್ಚುಗೆʼ ಹಾಗೂ ʻಅಭಿಪ್ರಾಯʼ ಸೂಚಿಸಲು ಮತ್ತು ಸಬ್ ಸ್ಕ್ರೈಬ್ ಮಾಡಲು ವಿನಂತಿ
ಡಾ.ಜಯಂತಿ ಮನೋಹರ್ ಬಿ.ಎಸ್.ಮನೋಹರ್ ವೇದಾರ್ಥ ಚಿಂತಕರು, ಲೇಖಕರು ಸಾಕ್ಷ್ಯಚಿತ್ರ ನಿರ್ದೇಶಕರು/ನಿರ್ಮಾಪಕರು ಭಾರತೀಯ ಸಾಂಸ್ಕೃತಿಕ ಪತ್ರಕರ್ತರು ಪರಂಪರೆಯ ಸಂಶೋಧಕರು