Рет қаралды 4,775,900
Nagarahavu Old Kannada Movie Song: Kannada Nadina Veera Ramaniya- HD Video
Actor: Vishnuvardhan, Jayanthi
Music: Vijaya Bhaskar
Singer: P B Srinivas
Lyrics: Chi Udayashankar
Director: Puttanna Kanagal
Year :1972
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nagarahavu - ನಾಗರಹಾವು1972*SGV
Kannada Naadina Veera Ramaniya Song Lyrics In Kannada
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ವೀರಮದಕರಿ ಆಳುತಲಿರಲು ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಹೆಣ್ಣು : ಓ... ಸರದಾರ....
ಗಂಡು : ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು
ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ
ಬರುವುದ ಕಂಡಳು
ಗಂಡು : ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರ ಗಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ಯಾರವಳು ವೀರ ವನಿತೆ ಆ ಓಬವ್ವ,
ದುರ್ಗವು ಮರೆಯದ ಓಬವ್ವ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗಂಡು : ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ್ತಾ
ವೈರಿ ರಂಡ ಚೆಂಡಾಡಿದಳು ರಕುತದ ಕೊಡಿ ಹಾರಿಸಿದಳು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗಂಡು : ಸತಿಯ ಹುಡುಕುತ ಕಾವಲಿನವನು ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು ಹೆಣದ ರಾಶಿಯ ಬಳಿಯ ಕಂಡನು
ರಣಚೆಂಡಿ ಅವತಾರವನು ಕೋಟೆ ಸಲುಹಿದ ತಾಯಿಯನು
ಹೆಣ್ಣು : ಹೈದರಾಲಿ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ ಹೋಗಿ ರಣಕಹಳೆಯನು ಊದಿ
ಗಂಡು : ರಣಕಹಳೆಯನು ಊದುತಲಿರಲು ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಷೇಶವಾಗಲು ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ ಚಿತ್ರದುರ್ಗದ ಓಬವ್ವ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ