Рет қаралды 19,152
ಮಂಗಳೂರು: ಕರಾವಳಿ ಭಾಗದಲ್ಲಿ ಕಟೀಲು ಮೇಳದ ಯಕ್ಷಗಾನ ಅಂದ್ರೆ ಭಾರೀ ಫೇಮಸ್. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನಕ್ಕೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಕಟೀಲು ದೇವಿಗೆ ಅತ್ಯಂತ ಪ್ರಿಯವಾದ ಸೇವೆಗಳಲ್ಲಿ ಯಕ್ಷಗಾನವೇ ಹೆಚ್ಚು ಪ್ರಿಯ. ದೇವಸ್ಥಾನದ ಮೇಳದವರು ಕಳೆದೆರಡು ಶತಮಾನಗಳಿಂದ ರಾತ್ರಿ ಪೂರ್ತಿ ಯಕ್ಷಗಾನ ಸೇವೆಗಳನ್ನು ಆಡಿಸಿಕೊಂಡು ಬರುತ್ತಿದ್ದರು.
ಆದರೆ ಇದೀಗ ಏಕಪಕ್ಷೀಯವಾಗಿ ದಿಢೀರನೇ ಸಂಜೆ 4.30ರಿಂದ ರಾತ್ರಿ 10 ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಯಕ್ಷಗಾನ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ದೇವಳದ ಈ ಆತುರದ ನಿರ್ಧಾರ ಭಕ್ತಾಧಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.
#mangaluru #yakshagana #durgaparameshwari
Our Website : Vijaykarnataka...
Facebook: / vijaykarnataka
Twitter: / vijaykarnataka