Рет қаралды 438
ಶಾರದೆ ಗಾನ ಶೃಂಗೇರಿಯ ಧ್ಯಾನ..
ಭಾವದೆದೆಯಲಿ ಶಾರದೆ ಗಾನ..
ರಾಗ ಹೊಮ್ಮಿತು ಶಾರದೆ ಗಾನ..
ಹೃದಯ ಮೀಟಿತು ಶಾರದೆ ಗಾನ..
ಶಾರದೆ ಗಾನ ಶೃಂಗೇರಿಯ ಧ್ಯಾನ..!! ಎಂಬ ಶೃಂಗೇರಿಯ ಶಾರದಾ ಮಾತೆಯ ಧ್ಯಾನ ಎಂಬ ಹಾಡು ಕೇಳಿದಾಗಲೇ ಭಯಭಕ್ತಿಯಿಂದ ಶಾರದಾ ಮಾತೆಯ ಮಡಿಲಲ್ಲಿ ತೇಲಾಡಿದ ಅನುಭವವೇ ಆದಂತೆ ಅನಿಸುವುದು ಅಲ್ಲವೇ..!? ಈ ಸುಂದರ ಗಾನವನ್ನು ಬರೆದು ಎಸ್.ಪಿ.ಬಾಲಸುಬ್ರಮಣ್ಯಂ ಅವರಿಂದಲೇ ಹಾಡಿಸಿ ಲೋಕಕ್ಕೆ ಮಂಗಳಾಷ್ಠಕವನ್ನು ಹಾರೈಸಿದವರು.
ಅವರೇ ನಮ್ಮ ವಿಶಿಷ್ಟ ವ್ಯಕ್ತಿಗಳ ಸಾಧಕ ಪರಿಚಯ ಮಾಲಿಕೆಯ ಇಂದಿನ ವಿಶೇಷ ಅತಿಥಿ...!! ಅವರನ್ನು ಪ್ರೀತಿಯಿಂದ ನಮ್ಮ ಮಂಗಳೂರು ಸಮಾಚಾರ ವಾಹಿನಿಯ ವೇದಿಕೆಗೆ ಬರಮಾಡಿಕೊಂಡು ತಮಗೆ ಪರಿಚಯಿಸುತ್ತಿದ್ದೇವೆ..
ಈಗಾಗಲೇ ಹೇಳಿರುವಂತೆ ಕವಿ ಸಾಹಿತಿ ಬರವಣಿಗೆಗಾರ ವಿಮರ್ಶಕ ನಾಟಕಕಾರ ಮಾತ್ರವಲ್ಲದೆ ಯಕ್ಷಗಾನ ಕಲಾವಿದರೂ ಆಗಿದ್ದಾರೆ ನಮ್ಮ ಈ ಕಲ್ಕಟ್ಟೆ ಎಚ್ ಆರ್ ನಾಗರಾಜ್.. ಹೀಗೆ ಸಾಹಿತ್ಯ ಪ್ರಕಾರದ ವಿವಿಧ ಕ್ಷೇತ್ರಗಳಲ್ಲಿ ಪಳಗಿದ ಸುರಿತ ವಿದ್ಯಾರ್ಥಿ ದೆಸೆಯಿಂದಲೇ ರಾಂಕ್ ವಿದ್ಯಾರ್ಥಿ ಎಂಬುದು ಅವರ ವ್ಯಕ್ತಿತ್ವಕ್ಕೆ ಇನ್ನೊಂದು ಮೆರುಗು..!!ಬೆಳೆಯ ಸಿರಿ ಮೊಳಕೆಯಲ್ಲಿಯೇ ಎಂಬ ಮಾತಿನಂತೆ ವಿದ್ಯಾರ್ಥಿ ದೆಸೆಯಿಂದಲೇ ತುಂಬಾ ಜಾಣ ವಿದ್ಯಾರ್ಥಿಯಾಗಿದ್ದ ಇವರು ಚಿನ್ನದ ಪದಕ ವಿಜೇತರು.. ತನ್ನ ಶಾರದೆ ಗಾನ ಹಾಡನ್ನು ಸಿನಿಮಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಸುಮಾರು 14ಗೀತೆಗಳನ್ನು ಹಾಡಿಸಿ ಸಾರಸ್ವತ ಲೋಕದ ಅಪಾರ ಜನಮೆಚ್ಚುಗೆ ಗಳಿಸಿದ್ದು ಇತಿಹಾಸ..!! ಶಾರದೆ ಗಾನವಂತೂ ಭಕ್ತಭಾವುಕ ಜನರ ಹೃದಯಕ್ಕೆ ನಾಟಿದ ಸುಂದರ ಶಾರದಾದೇವಿಯ ಭಜನಾ ಗೀತೆಯಾಗಿಯೇ ಜನರಿಂದ ಸ್ವೀಕರಿಸಲ್ಪಟ್ಟಿದೆ.. ಎಂಬುದು ಹೆಮ್ಮೆಯ ವಿಚಾರವಾಗಿದೆ..
ಉತ್ತಮ ಸಂಸ್ಕಾರ ಭರಿತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರಿಗೆ ತಂದೆ ತಾಯಿ ಅವರ ಪ್ರಭಾವ ತುಂಬಾ ಬೀರಿದೆ.
ಪ್ರೌಢಶಾಲೆ ವಿದ್ಯಾರ್ಥಿಯಾಗಿರುವಾಗಲೇ ನಾಟಕಗಳಲ್ಲೂ ಅಭಿನಯಿಸಿ ಅವರ ಗುರುಗಳಿಂದ ಭೇಷ್ ಎಂಬ ಹೆಗ್ಗಳಿಕೆಗೆ ಪಡೆದ ಇವರು ಮುಂದೆ ೩೦ರಿಂದ ೪೦ನಾಟಕಗಳಲ್ಲಿ ಅಭಿನಯಿಸಿ ಅಪಾರ ನಾಟಕಾಭಿಮಾನಿಗಳ ಮೆಚ್ಚುಗೆ ಪಡೆದು ಕರ್ನಾಟಕ ರಾಜ್ಯ ಸರ್ಕಾರದ ಗಮನ ಸೆಳೆದು ಕರ್ನಾಟಕ ರಾಜ್ಯದ ನಾಟಕ ಭೂ
ಮಂಡಳಿಯ ಸದಸ್ಯರನ್ನಾಗಿ ಗುರುತಿಸಿ ಗೌರವಿಸಿದೆ.. ಹೀಗೆ ರಂಗ ಕಲಾವಿದ ಸಂಗೀತಗಾರ ಕವಿ ಸಾಹಿತಿ ಬರವಣಿಗೆಗಾರ ವಿಮರ್ಶಕರಾದ ಇವರನ್ನು ನಮ್ಮ ಮಂಗಳೂರು ಸಮಾಚಾರ ವಾಹಿನಿಯು ಅತ್ಯಂತ ಪ್ರೀತಿಯಿಂದ ನಿಮಗೆ ಪರಿಚಯಿಸಲು ಸಂತೋಷ ಪಡುತ್ತಾ ಅವರೊಂದಿಗಿನ ಸಂದರ್ಶನವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ವೀಕ್ಷಕರೇ ನೀವೇ ವೀಕ್ಷಿಸಿ ಶಾರದೆ ಗಾಯನದಲ್ಲಿ ತೇಲಿ ಹೋಗಿ ಶಾರದಾ ಮಾತೆಯ ಧ್ಯಾನ ಮಾಡೋಣವೇ..!? ನಿಮ್ಮ ಪ್ರತಿಕ್ರಿಯೆಗಳಿಗೆ ಆತ್ಮೀಯ ಸ್ವಾಗತ ಸುಸ್ವಾಗತ ಬಂಧುಗಳೇ..
Mangalore Samachar..
/ @mangaloresamachar9338