Рет қаралды 291,754
ಕನ್ನಡದ ಪ್ರಸಿದ್ಧ ಗಾಯಕ ಕವಿ ಬಿ ಆರ್ ಲಕ್ಷ್ಮಣರಾವ್ ಅವರ "ಏನೀ ಆದ್ಭುತವೇ !" ಕವನ.
ನನ್ನ ಗುರು ಗುರುರಾಜ ಮಾರ್ಪಳ್ಳಿ ಅವರ ರಾಗ ಸಂಯೋಜನೆ ಹಾಗೂ ಸ್ವತಃ ಸಂಗೀತಜ್ಞರಾಗಿರುವ
ಬಿ ಆರ್ ಎಲ್ ಅವರ ಮಾರ್ಗದರ್ಶನದಲ್ಲಿ ಈ ಕವನವನ್ನು ಪ್ರಸ್ತುತ ಪಡಿಸಿದ್ದೇನೆ.
ಈ ಕವನ ದೈನಂದಿನ ಬದುಕಿನ ಜಂಜಡಗಳ ನಡುವಿನಲ್ಲೂ ಘಟಿಸುವ ಪುಟ್ಟ ಸಂಭ್ರಮಗಳನ್ನು ಎತ್ತಿ ತೋರಿಸುತ್ತದೆ. ಮಧ್ಯಮ ವರ್ಗದ ಗೃಹಿಣಿಯೊಬ್ಬಳು ಇಂಥ ಖುಷಿಗಳನ್ನು
ತನಗೆ ನೀಡಿರುವ ಬದುಕು ಅದೆಷ್ಟು ಅದ್ಭುತವೆನ್ನುತ್ತಾ ಅದರೆಡೆಗೆ ಇರುವ ಧನ್ಯತಾ ಭಾವವನ್ನು ಗೆಳತಿಯೊಂದಿಗೆ ಹಂಚಿಕೊಳ್ಳುತ್ತಾಳೆ.
ಈ ಕವನವು ಕೊರೋನ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ವಿಶ್ವಕ್ಕೆ ಒಂದು ಆಶಾಕಿರಣದಂತೆ ಇಂದಿಗೂ ಪ್ರಸ್ತುತವಾಗುತ್ತದೆ.
Follow me on instagram
/ manasi_sudhir
Follow me on facebook
/ bhaavageethabhinaya
Follow me on KZbin
/ @manasisudhir