Рет қаралды 881
ನಾದಬ್ರಹ್ಮ ಪಾಂಡುರಂಗ ವಿಠ್ಠಲ ವಾರಕರಿ ಸಾಂಪ್ರದಾಯಿಕ ಭಜನೆ I RKB INFO KANNADA I 2023
ಪಂಡರಾಪುರದ ಪಾಂಡುರಂಗ ವಿಠಲ ನಾದಬ್ರಹ್ಮ, ನಾದಪ್ರಿಯ. ಪಾಂಡುರಂಗ ವಿಠ್ಠಲನಿಗೆ ಭಜನೆ, ನಾಮಸ್ಮರಣೆ ಅತ್ಯಂತ ಶ್ರೇಷ್ಠವಾದ ಸೇವೆ. ಮೈಸೂರಲ್ಲಿ 1936 ರಿಂದ ಇಲ್ಲಿಯವರೆಗೂ ವಾರ್ಕರಿ ಸಾಂಪ್ರದಾಯಿಕ ಭಜನೆ ನಿರಂತರವಾಗಿ ನಡೆದು ಬಂದಿದೆ. ವಾರಕರಿಗಳು ಎಂದರೆ ಆಗಾಗ್ಗೆ ಪಂಡರಪುರಕ್ಕೆ ಯಾತ್ರೆ ಮಾಡುವವರು ಎಂದರ್ಥ. ಅವರು ವಿಠಲನ ಅನುಯಾಯಿಗಳು. ಅವರ ಆರಾಧ್ಯ ದೈವ ಪಂಡರಪುರದ ಪಾಂಡುರಂಗ ವಿಠ್ಠಲ. ಪ್ರತಿ ವರ್ಷ ಆಷಾಡ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷ ಏಕಾದಶಿಗಳಂದು ನೂರಾರು ಕಿ. ಮೀ. ನಡೆದುಕೊಂಡೆ ಪಂಡರಪುರಕ್ಕೆ ಯಾತ್ರೆ ಹೋಗುವುದು ರೂಡಿ. ಈ ಯಾತ್ರೆಗೆ ಮರಾಠಿಯಲ್ಲಿ 'ವಾರಿ ' ಎನ್ನುತ್ತಾರೆ. ಭಗವಂತನೇ ಪರಮ ಸತ್ಯ ಎಂದು ಪ್ರತಿಪಾದಿಸುವ ವಾರಕರಿಗಳು, ಎಲ್ಲಾ ಮಾನವರು ಸಮಾನರು ಎಂದು ನಂಬುತ್ತಾರೆ. ವೈಯಕ್ತಿಕ ನೆಲೆಯಲ್ಲಿ ತ್ಯಾಗ, ಸರಳತೆ, ಕ್ಷಮೆ, ಇಂದ್ರಿಯಾಸಕ್ತಿಗಳನ್ನು ಗೆಲ್ಲುವುದು, ಅಹಿಂಸೆ, ಪ್ರೇಮ, ವಿನಯ, ಸಹಬಾಳ್ವೆ ಈ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ.
Tags:
#Pandharpur Vitthal
#Vitthal bhajan
#Mysore panduranga temple
#abhang