Рет қаралды 10,787
Maadhyama Aneka | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ
2013ರಲ್ಲಿ ಪ್ರಕಟವಾದ “ಮೋಹನ ಸ್ವಾಮಿ” ಕಥಾ ಸಂಕಲನ ಸಾಹಿತ್ಯ ಮತ್ತು ಸಾಮಾಜಿಕ ವಲಯಗಳಲ್ಲಿ ಹೊಸ ಸಂಚಲನ ಮತ್ತು ಚರ್ಚೆಗೆ ಹುಟ್ಟುಹಾಕಿತು. ಅದರ ಲೇಖಕ ವಸುಧೇಂದ್ರ ಅವರು ತಮ್ಮ ಮೋಹನಸ್ವಾಮಿ ಪುಸ್ತಕ ಪ್ರಕಟಿಸುವುದರೊಂದಿಗೆ ತಾವೊಬ್ಬ Gay ಎಂಬುದನ್ನೂ ಬಹಿರಂಗಪಡಿಸುವುದರೊಂದಿಗೆ ಸಾಮಾಜಿಕ ವಲಯಗಳಲ್ಲೂ ಸಂಚಲನೆಯನ್ನು ಸೃಷ್ಟಿಸಿದರು. ಗೇಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವೀಕಾರದ ಕುರಿತು ಬರೆದ ಆ ಪುಸ್ತಕ ಎಷ್ಟು ಜನಪ್ರಿಯವಾಯಿತೆಂದರೆ ದಕ್ಷಿಣದ ಎಲ್ಲ ಭಾಷೆಗಳು ಮತ್ತು ಹಿಂದಿಗೂ ಅನುವಾದವಾಗುವುದಷ್ಟೇ ಅಲ್ಲದೆ English ಮತ್ತು Spanishಗೂ ಭಾಷಾಂತರವಾಯಿತು.
“ಮೋಹನಸ್ವಾಮಿ” ವಸುಧೇಂದ್ರರ ಮೊದಲ ಕೃತಿಯಲ್ಲ. ಮನೀಷೆ, ಯುಗಾದಿ, ಕೋತಿಗಳು, ಚೇಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ಹಂಪಿ ಎಕ್ಸ್ ಪ್ರೆಸ್, ವರ್ಣಮಯ ಇತ್ಯಾದಿ ಕತೆಗಳು ಮತ್ತು ಸುಲಲಿತ ಪ್ರಬಂಧಗಳನ್ನು ವಸುಧೇಂದ್ರ ಅವರು ಬರೆದಿದ್ದಾರೆ. “ಮಿಥುನ” ಶೀರ್ಷಿಕೆಯಲ್ಲಿ ರಮಣ ಅವರ ಕಥೆಗಳ ಅನುವಾದ, ಪರ್ವತಾರೋಹಣದ ದುರಂತದ ಬಗ್ಗೆ ಜಾನ್ ಕ್ರಾಕೌರ್ ಅವರ “ಎವರೆಸ್ಟ್” ಪುಸ್ತಕದ ಅನುವಾದವನ್ನೂ ಮಾಡಿದ್ದಾರೆ. ಇದೀಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಪಡೆದ “ತೇಜೋ ತುಂಗಭದ್ರಾ” ವಸುಧೇಂದ್ರ ಅವರ ಇತ್ತೀಚಿನ ಜನಪ್ರಿಯ ಕಾದಂಬರಿ.
“ನನ್ನ ಕತೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಬಾರದು” ಅನ್ನುವ ವಸುಧೇಂದ್ರ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಹಾಗೆ ಸರಳವಾಗಿ ಬರೆಯುತ್ತಾರೆ. ತಮ್ಮ ಬರಹಗಳಂತೆ, ಮಾತು ಹಾಗೂ ನಡವಳಿಕೆಯಲ್ಲೂ ಸರಳತೆ ಹೊಂದಿರುವ ವಸುಧೇಂದ್ರ, ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುರತ್ಕಲ್ ನ National Institute of Technologyಯಿಂದ ಇಂಜಿನಿಯರಿಂಗ್ ಪದವಿ ಪಡೆದ ಇವರು, ಬೆಂಗಳೂರಿನ Indian Institute of Science ನಿಂದ Master of Engineering ಪದವಿ ಗಳಿಸಿದ್ದಾರೆ. ಆ ಬಳಿಕ, ಸುಮಾರು 20 ವರ್ಷಗಳ ಕಾಲ Software ತಜ್ಞರಾಗಿ ಆಗಿ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ್ದಾರೆ.
ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು” ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು”ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ನಮ್ಮ ನಡುವಿನ ಒಬ್ಬ ಅಪರೂಪದ ವ್ಯಕ್ತಿ, ಯುವ ಜನತೆಯ ಇಷ್ಟದ ಕತೆಗಾರ, ಸರಳ, ಹಸನ್ಮುಖಿ ಲೇಖಕ ಮತ್ತು ಪುಸ್ತಕ ಪ್ರಕಾಶಕ ವಸುಧೇಂದ್ರ ಮಾಧ್ಯಮ ಅನೇಕ Webಸಂಭಾಷಣೆ “ಬಿಚ್ಚಿಟ್ಟ ಬುತ್ತಿ”ಯ ಅತಿಥಿ.
#Vasudhendra #Writer #Publisher #LGBTActivist #Author #IndianAuthor #Maneeshe #Ugadi #Chelu #HampiExpress #Mohanaswamy #VishamaBhinnaraashi #Gay #Kothigalu #NammammaAndreNangishta #RakshakaAnnatha #Varnamaya #AiduPaiseVardakshine #HarichittaSatya #TejoTungabhadra #Mithuna #Everest #ECommerce #Mohanaswamy #KarnatakaSahityaAcademyAward #DaRaaBendreStoryAward #MastiKathaAward #URAnanthamurthyAward #BesagarahalliRamannaAward #VasudhevaBhoopalamAward #VardhamanaUdayonmukhaAward #AmmaAwardFromSadem #KatharangamAward #ChandaPustaka #ChandaPustakaBahumana #LGBT #GoodAsYou @ChandaPustaka #Sandalwood #Interview #Trending #Viral #Kannada #KFI #Kannada
Subscribe for Maadhyama Aneka Channel to get updates and notification on more entertainment and infotainment content.
/ @maadhyamaaneka
Please leave your feedback and comments.
Follow Maadhyama Aneka on :
Facebook : / maadhyama
Instagram : / maadhyama.aneka
Twitter : / maadhyamaa
Website : www.maadhyama-aneka.com
© Maadhyama Aneka Pvt. Ltd.