Рет қаралды 26,739
ಹರೇ ಶ್ರೀನಿವಾಸ,
ಕಷ್ಟಗಳ ಪರಿಹಾರಕ್ಕಾಗಿ ಸಂಜೀವಿನಿ ರಂಗೋಲಿ ಹಾಕುವ ವಿಧಾನವನ್ನು ತೋರಿಸಲಾಗಿದೆ. 27ನೇ ಏಪ್ರಿಲ್ 2021 ಮಂಗಳವಾರದಂದು ಹನುಮಂತ ಜಯಂತಿ, ಚಿತ್ರ ಪೂರ್ಣಿಮಾ.
ಬಿಡುವೆನೇನಯ್ಯ ಹನುಮ ಬಿಡುವೇನೇನಯ್ಯ ||ಪ|| ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವಕಟ್ಟಿ | ಧೃಡ ಭಕ್ತಿ ಸುಜ್ಞಾನವನ್ನು ಕೊಡುವ ತನಕ ಸುಮ್ಮನೆ ನಿನ್ನ ||ಅ.ಪ.||
ಹಸ್ತವ ಮೇಲಕ್ಕೆತ್ತಿದರೇನು ಹಾರಾಕಾಲನು ಇಟ್ಟರೇನು I ಭೃತ್ಯನು ನಿನ್ನವನು ನಾನು | ಹಸ್ತಿವರದನ ತೋರುವ ತನಕ II 1 II
ಹಲ್ಲು ಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು I
ಪುಲ್ಲನಾಭನಲಿ ಎನ್ನ ಮನಸು ನಿಲ್ಲಿಸೋತನಕ ಸುಮ್ಮನೆ ನಿನ್ನ || 2 ||
ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ | ಕಿಂಕರನು ನಿನ್ನವನು ನಾನು ಪುರಂದರ ವಿಠಲನ ತೋರುವ ತನಕ II 3 II