Рет қаралды 171,598
ALADIRU SUMMANIRAMMA
LYRICS: SRI PRASANNA VENKATA DASARU
MUSIC, BACKGROUND MUSIC AND RENDITION : RAICHUR SHESHAGIRIDAS
ಜಗದೊಡೆಯ ಶ್ರೀ ಕೃಷ್ಣ.
ಇಲ್ಲಿ ಪುಟ್ಟ ಕೃಷ್ಣ.
ಯಶೋದೆಯ ಬಾಯಿಯಲ್ಲಿ ರಮಿಸುವ ಮಾತನಾಡಿಸುತ್ತಾ ಬವ್ವ - ದೆವ್ವ ಎಂದು ಹೆದರಿಸುವ ನೆಪದಲ್ಲಿ ಕ್ರಮವಾಗಿ ಬ್ರಹ್ಮ, ವಾಯು, ರುದ್ರ ಹಾಗೂ ಇಂದ್ರಾದಿ ದೇವತೆಗಳನ್ನು ಸೂಚ್ಯವಾಗಿ ಶ್ರೀ ಪ್ರಸನ್ನ ವೆಂಕಟ ದಾಸರು ಪರಿಚಯ ಮಾಡಿ ಕೊಟ್ಟಿರುವ ಒಂದು ಸುಂದರ ಹಾಗೂ ಅದ್ಭುತ ರಚನೆ.
ರಚನೆ : ಶ್ರೀ ಪ್ರಸನ್ನ ವೆಂಕಟ ದಾಸರು
ರಾಗ ಸಂಯೋಜನೆ , ಗಾಯನ : ರಾಯಚೂರು ಶೇಷಗಿರಿ ದಾಸ್
ರಚನೆ : ಶ್ರೀ ಪ್ರಸನ್ನ ವೆಂಕಟ ದಾಸರು
ರಾಗ ಸಂಯೋಜನೆ , ಗಾಯನ : ರಾಯಚೂರು ಶೇಷಗಿರಿ ದಾಸ್.
____________________
ಅಳದಿರು ಸುಮ್ಮನಿರಮ್ಮ ನೀ
ಅಳದಿರೊ ಬವ್ವಾ ಬಂದಾವಮ್ಮ ಕೃಷ್ಣಮ್ಮ ।। ಪ ।।
ನಾಲ್ಕು ಮೊಗವುಳ್ಳ ಬವ್ವಾ ಹದಿನಾಲ್ಕು ಜಗವ ಜೋಳಿಯಲಿಟ್ಟ ಬವ್ವ
ಗೋಳಿಟ್ಟಿಸುತಿದೆ ಬವ್ವಾ ನಿನ್ನ
ಕಾಲು ಕಂಡರೆ ಕಚ್ಚಿ ಕೊಂಡೊಯ್ವ ಬವ್ವಾ ।। ೧ ।।
ಗಗನ ತುಂಬ್ಯಾಡುವ ಬವ್ವಾ ಪ್ರಾ-
-ಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವಾ
ಜಗವನಲ್ಲಾಡಿಪ ಬವ್ವಾ ನಿನ್ನ
ಮೊಗವರಿತು ದೂರಲಿ ನಿಂತಿಪ್ಪ ಬವ್ವಾ ।। ೨ ।।
ಮೊಗವೈದು ಫಣೆಗಣ್ಣ ಬವ್ವಾ ಹುಲಿ-
-ದೊಗಲು ಕೆಂಜಡೆ ರುಂಡ ಮಾಲೆಯ ಬವ್ವಾ
ಬಗೆಯಿಂದ ಪೆಣ್ಣೆತ್ತಿ ಬವ್ವಾ ತಾ
ಸೊಗಸೀಲೇ ರಾಮ ರಾಮೆನುತಿದೆ ಬವ್ವಾ ।।೩।।
ಮೈಯೆಲ್ಲ ಕಣ್ಣಿನ ಬವ್ವಾ ತನ್ನ
ಕೈಯಲಿ ವಜ್ರವ ಬೀಸುವ ಬವ್ವಾ
ಉಯ್ಯಾಲಾಡುತಲಿದೆ ಬವ್ವಾ ನಿನ್ನ
ವೈವೆನೆನುತ ಬಂತು ಹಲಕಾಲ ಬವ್ವಾ ।। ೪ ।।
ಒಂದಲ್ಲ ನೂರಲ್ಲ ಬವ್ವಾ ನಿನ್ನ
ಮಂದಿರ ಸುತ್ತುತಾವನಂತ ಬವ್ವಾ
ಪೊಂದೊಟ್ಟಿಲೊಳು ನಿದ್ರೆ ಗೈಯೆ ಎನ್ನ
ತಂದೆ ಪ್ರಸನ್ನ ವೆಂಕಟ ಸಿರಿ ದೊರೆಯ ।। ೫ ।।