Рет қаралды 367,703
ಪಾದ ಕಂಡು ಪಾವನಾದೆನೋ ಶ್ರೀಗಿರಿಯ ನಿಲಯನ ||ಪಾದ ಕಂಡು ಪಾವನಾದೆನೋ
ಪಾದ ಕಂಡು ಪಾವನಾದೆನೊ ಮಾಧವನ ಪ್ರಸಾದ ಪಡೆದೆನೋ
ಹಾದಿ ಕಾಣದೆ ಪರಮ ದುರ್ಭವ ಭಾದೆಯೊಳು ಬಿದ್ದು ತೊಳಲಿ ಬಳಲುತ
ಮೇಧಿನಿಯೊಳು ಜನುಮತಾಳಿ ಭೇದ ಮತದ ಹಾದಿ ಬಿಟ್ಟೂ ||
ನೀಲ ಬಣ್ಣದೊಪ್ಪುವ ಸುಂದರ ಶುಭ ಕಾಯೆ ಇಂದಿರೆ
ಲೋಲ ತ್ರಿಜಗನ್ಮೋಹನಾಕಾರ ಕೊರಳಾ ಪದಕ
ಮಾಲ ಕೌಸ್ತುಭ ಮುಕುಟ ಮನಿಹಾರ ರತ್ನದುಂಗುರ
ಕಾಲಲೊಳೆಯುವ ಗೆಜ್ಜೆ ಸರಪಣಿ ಶೀಲ ವೈಷ್ಣವ ನಾಮ ಫಣೆಯಲಿ
ಕಾಲರಕ್ಕಸ ಕುಲ ಸಂಹಾರನ ಪಾಲಸಾಗರ ಕನ್ಯೆ ವರಣ
ಫಾಲಮೂಲೋಕ ಸಾರ್ವಭೌಮನ ಮೇಲುಭೂವೈಕುಂಠದಲ್ಲೀ…
ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ
ಸದಮಲಾಂಗ ಯೌವ್ವನಾಕಾರ ಸುಸಂಧ್ಯಾಕಾಲದಿ
ಮುದುಕನಾಗಿ ಕಾಂಬ ಮನೋಹರ ಬಹು ಮಹೀಮಗಾರ
ಪದುಮ ವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
ಒದಗಿ ಬಂದ ಭಕುತ ಜನರನು ಸುಜಯದಿಂದ ಕರೆದು ಪ್ರಸಾದ
ಮುದದಿ ನೀಡುತ ಕ್ರಪೆಯತೋರಿ ಸದಮಲ ಸಂಪದವನೀವನಾ
ಉಟ್ಟಧುಕೂಲ ಶಲ್ಯಜರತಾರ ಕೈಯಲ್ಲಿ ಕಂಕಣ
ಪಟ್ಟ ರತ್ನದ ನಡುವಿಗುಡಿಧಾರ ವರ್ಣಿಸುವರಾರು ಸ್ರಷ್ಟಿಯೊಳಗೀತ
ಮೀರಿದವತಾರ ಇನಕೋಟಿ ಪ್ರಭಾಕರ
ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ
ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸು ಕೊಳ್ಳುವ
ದುಷ್ಟಭ್ರಷ್ಟ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನಾ…
ಒಂದೇ ಮನದಲಿ ಸಕಲ ಸೇವಕರು ಭಯ ಭಕುತಿಯಿಂದ
ಬಂದು ಹರಕೆಯ ತಂದು ನೀಡುವರು ತುಂಬುರ ನಾರದರೊಂದಿಗಾನದಿಂ
ಪಾಡಿ ಪೊಗಳುವರು ಆನಂದ ಕೋರುವರು
ಹೊಂದಿ ಭಜಿಸುತ ಸಪ್ತಋಷಿಗಣ ಬಂದು ಇಳಿವರು ಬಿಡದೆ ಅನುದಿನ
ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
ಗಂಧಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನಾ…
ತೀರದೀತನ ಲೋಕ ಶ್ರಂಗಾರ ಏರಿ ನೋಡಲು
ಹಾರಗಿರಿತುದಿ ಗಾಳಿ ಗೋಪುರ ಮುಂದೆ ನಡೆಯಲು ದಾರಿಯಲಿ
ಕೊಳ್ಳ ಏಳು ವಿಸ್ತಾರ ಪರಮ ಪರಾಧರ
ತೋರುವ ಮಹ ಗುಡಿಯ ಗೋಪುರ ದ್ವಾರ ಚಿಣ್ಣದ ಕಲಶ ಬಂಗಾರ
ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರಯಲೋಸುಗ
ಸೇರಿ ಧಾರುಣಿ ವೈಕುಂಠವೆನಿಸಿದ ಧೀರವೆಂಕಟ ಶ್ರೀಶ ರಾಮನ
#kannada #devotional #song