Рет қаралды 107
ರುದ್ರ ವೀರಭದ್ರ ಆದ್ರಿನಂದನೆ ರಮಣ IIಪII
ಕೌದ್ರ ಮೂರುತಿ ದಯಾ ಸಮುದ್ರ ಎನ್ನನು ಕಾಯೊ II ಅ ಪ II
ಮುಪ್ಪುರ ವಗೆದ್ದ ಮುಕ್ಕಣ್ಣ ಮನ್ಮಥ ವೈರಿ
ಸರ್ಪಭೂಷಣ ಮೃತ್ಯು ನಿವಾರಣ
ಕಪ್ಪು ಕೊರಳ ಕೃತಿವಾಸ ವ್ಯೋಮಕೇಶ
ಒಪ್ಪಿಕೊಳ ಬೇಕು ಒಲಿದು ಈ ವಾಕ||1||
ಸದ್ಯೋಜಾತಭೂತನಾಥಭಕುತರ ವಾತ
ಖದ್ಯೋತ ಲಾವಣ್ಯ ಸುರಜೇಷ್ಟನ
ಮದ್ಯದಾನನ ಛೇದಶ್ರೀವಿಷ್ಣುವಿನಪಾದ
ಹೃದ್ಯದೊಳಗಿಟ್ಟ ಜಟಾಜೂಟ ಬಲು ದಿಟ್ಟ||2||
ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ
ಜನಿಸಿ ಕಾಡುವ ರೋಗ ಕಳೆಯೋ ಬೇಗ
ಅನುಪಮ ವಿಜಯವಿಠ್ಠಲನ ನಾಮಾಮೃತ
ಎನ ಗುಣಿಸುವುದೋ ಸಾಂಬಮೂರುತಪ್ರತಿಬಿಂಬಾ||3||