Рет қаралды 21,011
##ಚಾತುರ್ಮಾಸದ_ರಂಗೋಲಿ_ಹಾಡು
ಇಲ್ಲಿ ಚಾತುರ್ಮಾಸ ರಂಗೋಲಿ ಹೇಗೆ ಹಾಕಬೇಕು ಅಂತ ತೋರಿಸಿ ಕೊಟ್ಟಿದ್ದೇನೆ ನೋಡಿ 👇
• ಚಾತುರ್ಮಾಸದ ರಂಗೋಲಿ ಅಧಿಕ...
ಹಾಡು
ಏಕಾದಶಿ ವಿಷ್ಣನ್ನ | ದ್ವಾದಶಿ ದ್ವಾರಪಾಲಕರನ್ನ | ಇಂದ್ರನ್ನ, ಚಂದ್ರನ, ದೇವೇಂದ್ರನ್ನ, ಪಂಚಪಾಂಡವರನ್ನು ಕೂಡಿ ಪಗಡಿ ಆಡೋ ಹೊತ್ತಿನ ವಳಗ ತಂತಿ ಹರಿತು ಬೇಲಿ ಮುರಿತು ಅಂತ ದ್ವಾರಪಾಲಕರು ಹೇಳಿದರು || ಊರೊಳಗೆ ಚಾತುರ್ಮಾಸದ ರಂಗೋಲಿ ಯಾರ ಹಕ್ಕಾರ ನೋಡಿಕೊಂಡು ಬಾ ಅಂತಾ ಹೇಳಿದರು 1 ಗಂಗಿ ಹಾಕ್ಕಾಳ, ಗೌರಿ ಹಾಕ್ಯಾಳ, ಸಾವಿತ್ರಿ ಹಾಕ್ಯಾಳ, ಸರಸ್ವತಿ ಹಾಕ್ಯಾಳ, ಶ್ರೀಕೃಷ್ಣನ ತಂಗಿ ಸುಭದ್ರಾ ಹಾಕಿಲ್ಲ ಅಂತ ಹೇಳಿದರು ಆಕಿ ಬೆನ್ನು ಹರು ತಂದು ಬೇಲಿಗೆ ಬಿಗಿರಿ ನರಾ ತಂದು ತಂತಿಗೆ ಬಿಗಿರಿ ಅಂತ ಅಂದ್ರು ಆಗ ಉದಯ ಕಾಲದಲೆದ್ದು ಶ್ರೀಕೃಷ್ಣಾ ಪರಮಾತ್ಮ ತಂಗಿ ಮನೆಕಡೆ ಹೋದಾ ಯಾಕ ತಂಗಿ ಚಾತುರ್ಮಾಸ್ಯ ನೇಮಾ ಏನು ಮಾಡಿದಿ ಅಂತಾ ಕೇಳಿದ ಇಂದ್ರನಂಥಾ ಗಂಡನ್ನ ಬಲ್ಲೆ, ಚಂದ್ರನಂಥಾ ತಮ್ಮನ್ನ ಬಲ್ಲೆ, ಅರ್ಜುನನಂಥಾ ಗಂಡನ್ನ ಬಲ್ಲೆ, ವಾಸುದೇವ ದೇವಕಿ ಅಂಥಾ ತಂದೆ-ತಾಯನ್ನ ಶ್ರೀಕೃಷ್ಣ ಪರಮಾತ್ಮನ ಬಲ್ಲೆ ಅಂದಳು. ಹಂಗ ಅಂದರ ಹ್ಯಾಂಗವಾ ರಂಗೋಲಿ ಹಾಕು ನೇಮ ಹಿಡಿ, ಘಟ್ಟ ಬೆಟ್ಟಕ್ಕೆ ಹೋಗಿ ಅಚ್ಚ ಬೆಂಚಿಕಲ್ಲು ತಂದು ಹವಳ, ಮುತ್ತು ಹಾಕಿ ಕುಟ್ಟಿ ಬೀಸಿ] ಶ್ರೀಕೃಷ್ಣನ ಗದ್ದುಗೆ, ವಿಷ್ಣುಪಾದ, ಶಂಖಾ, ಚಕ್ರಾ, ಗದಾ ಪದ್ಮಾ ಸ್ವಸ್ತಿಕೆ ವೃಂದಾವನ ಕೊಳಲು, ತಂತಿ, ಬೇರಿ ಆಕಳು, ಕರು ಮೂವತ್ತಮೂರು ಪದ್ಮ ಶ್ರೀ ರಾಮನ ತೊಟ್ಟಿಲು, ಸೀತಾ ತೆರಗು, ತುಳಸಿದಳಾ ಇಷ್ಟೆಲ್ಲಾ ಹಾಕಬೇಕು. ಆನೆ, ದ್ವಾರಪಾಲಕರು ಹಾಕಬೇಕು ಅಂತಾ ಹೇಳಿದ, ತಂಗಿ ಸುಭದ್ರಾ ಬೆಂಚಿಕಲ್ಲು ತಂದು ಹವಳಾ ಮುತ್ತು ಹಾಕಿ ಕುಟ್ಟಿ ರಂಗೋಲಿ ಅಣ್ಣ ಶ್ರೀಕೃಷ್ಣ ಹೇಳಿದಂತೆ ಹಾಕಿದಳು. ಈ ರಂಗೋಲಿಯನ್ನು ಕರಿ ಆಕಳು ಕಟ್ಟಿದಲ್ಲೇ, ಬಿಳಿ ಆಕಳು ಬಿಚ್ಚಿದಲ್ಲಿ ಋಷಿಗಳು ಕೂಡುವ, ಗಂಗಾ ತಟಕಾದಲ್ಲೆ, ದೇವರ ಮುಂದೆ, ತುಳಸಿ ಮುಂದ ಇಂಥ ಸ್ಥಳದಲ್ಲೇ ಹಾಕಬೇಕು ಸುಭದ್ರಾ ರಂಗೋಲಿ ಹಾಕಿ ಅರಿಷಿಣ ಕುಂಕುಮ, ಅಕ್ಕಿಕಾಳು ಅರ್ಥ್ಯ ಕೊಟ್ಟಳು ಐದು ವರ್ಷ ಹಾಕಿದಳು. ರಂಗೋಲಿ ಹೋಗಿ ಗುಡ್ಡಾಗಿ ನಿಂತು, ಅರಿಷಿಣ ಕುಂಕುಮ ಬೆಟ್ಟ ಆಗಿ ನಿಂತು , ಅಕ್ಕಿ ಕಾಳು ರಾಶಿ ಆಗಿ ನಿಂತು ಅರ್ಘ್ಯ ಕೊಟ್ಟದ್ದು ಹಳ್ಳ ಆಗಿ ಹರಿದು , ಮೊದಲನೇ ವರ್ಷ ಶಾವಿಗೆ ಪಾಯಸ , ಎರಡನೆ ವರ್ಷ ಎಣ್ಣೊರಿಗೆ ,ಮೂರನೇ ವರ್ಷ ಮುಚ್ಚೋರಿ
ನಾಲ್ಕನೇ ವರ್ಷ ಅನಾರಸ, ಐದನೇ ವರ್ಷ ಮಂಡಿಗೆ ಕೊಟ್ಟಳು. ಅಣ್ಣ ಆಗಿ ತೆಗೆದುಕೊಂಡ, ತಮ್ಮನಾಗಿ ತೆಗೆದುಕೊಂಡ. ಶ್ರೀಕೃಷ್ಣ ಪರಮಾತ್ಮನಾಗಿ ತೆಗೆದುಕೊಂಡ. ಸುಭದ್ರಾ ಹಾಕಿದ ರಂಗೋಲಿ ಸಂಪೂರ್ಣ೦ || ಶ್ರೀಕೃಷ್ಣಾರ್ಪಣಮಸ್ತು